Posts

ಸೆಲ್ಪೀ........

Image
ನಿಜದ ನೆಲೆಯ  ಭಾವಚಿತ್ರ         ಸೆಲ್ಫೀಯೊಳಗೇನಿದೆ? ಏನಿಲ್ಲ? ಇರುವುದೆಲ್ಲವೂ ಇದೆ. ಕಂಡದ್ದನ್ನು ಮಾತ್ರವಲ್ಲದೆ ಕಾಣದ್ದನ್ನೂ, ಕಾಣಬೇಕಾದುದನ್ನೂ ಕಾಪಿಟ್ಟಿದೆ. ಕ್ಯಾಮರಾದೊಳಗಿನ ಸೆಲ್ಫೀ ನೋಡಿದ್ದನ್ನು ಅದಲು ಬದಲಾಗಿ ತೋರಿಸುತ್ತೆ ಅಷ್ಟೇ!  ದಿಕ್ಕು ಬದಲಾಗಿ ಕೆಲವೊಮ್ಮೆ ನೋಡುವವರ ದಿಕ್ಕೇ ಬದಲಾಗುತ್ತದೆಯಾದರೂ ಉಳಿದದ್ದೆಲ್ಲವೂ ಸುಸ್ಪಷ್ಟ.  ಆದರೆ ನಳಿನಿ ಭೀಮಪ್ಪರವರ ಸೆಲ್ಫೀಯ ಬಿಂಬದೊಳಗೆ ಜೀವನದ ಅನುಭವಕಥನವು ರಸಕವಳದಂತೆ ದಟ್ಟವಾಗಿ ಆವರಿಸಿಕೊಂಡಿದೆ. ಬಯಲುಸೀಮೆ ಮತ್ತು ಉತ್ತರದ ಧಾರವಾಡ ಬದುಕನೆಲ್ಲ ಇಂಚಿಂಚಾಗಿ ಉಂಡು, ತಿಂದು, ತೇಗುವುದು ಮಾತ್ರವಲ್ಲದೆ ಹತ್ತಿರ ಬಂದವರ ಉಡಿಯೊಳಗಿನ ಬೆಲ್ಲವನ್ನೂ ಓದುಗರಿಗೆ ಉಣಬಡಿಸುವ ಪ್ರಬಂಧಗಳಿವು. ಓದುತ್ತಾ ಹೋದಂತೆ ಓದುಗರ ಸ್ವತ್ತನ್ನೇ ಕದ್ದು ದಾಖಲಿಸಿದ ಕಥನಗಳಂತೆ ಭಾಸವಾಗುವ ಮೂವತ್ತೆರಡು ಪ್ರಬಂಧಗಳು ಹೊಸ ಹೊಸ ನೋಟವನ್ನು ವಿಸ್ತರಿಸುವ ವಿಡಿಯೋ ತುಣುಕುಗಳಂತೆ ಸರಿದು ಹೋಗುತ್ತವೆ. ಮುಖ್ಯವಾಗಿ ಇರುವುದನ್ನೆಲ್ಲ ಮುಕ್ತವಾಗಿ ಹಂಚಿಕೊಳ್ಳುವ ಎದೆಗಾರಿಕೆ, ಪ್ರಾದೇಶಿಕ ಭಾಷಾ ಸೊಗಡು ಮತ್ತು ಮುನ್ನಡೆಸಿಕೊಂಡು ಹೋಗುವ ರೀತಿಗಳೆ ಕೃತಿಯನ್ನು ಮತ್ತು ಕೃತಿಕಾರರನ್ನು ಗೆಲ್ಲಿಸಿವೆ.  ಒಂದು ವಿಧದಲ್ಲಿ ಕೃತಿಕಾರರ  ಆತ್ಮಕಥನದ ಮೊದಲ ಭಾಗವಾಗಿ, ಈ ನೆಲದ ಸಮಸ್ತರ ಬಾಲ್ಯವಾಗಿ, ಬದುಕಾಗಿ ಎದುರುಗೊಳ್ಳುತ್ತವೆ. ವರ್ತಮಾನ, ಭೂತ ಹಾಗೂ ಭವಿಷ್ಯದ ತಕ್ಕಡಿಯಲ್ಲ...

ತಡಿಕೆಯೊಳಗಿನ ಭಾವಕೋಶ. ಡಾ.ಎಚ್.ಎಸ್.ಸತ್ಯನಾರಾಯಣರವರ ಬಿದಿರ ತಡಿಕೆ ಪ್ರಬಂಧ ಸಂಕಲನದ ಬಗೆಗೊಂದಿಷ್ಟು ಅಕ್ಕರದ ಅಕ್ಷರ.......

Image
ತಡಿಕೆಯೊಳಗಿನ ಭಾವಕೋಶ   ಬದುಕೆಂಬುದು ಸುಂದರ ಉದ್ಯಾನವನದಲ್ಲರಳುವ ಮಹಾಕಾವ್ಯ. ದೂರದಿ ನಿಂತು ನೋಡುವ ಸೊಬಗು, ತುಂಬಿಕೊಳ್ಳುವ ಆನಂದ, ಅನುಭವಿಸುವ ಮಾಧುರ್ಯ, ಉದ್ಘರಿಸುವ ಸಂಭ್ರಮಗಳೆಲ್ಲ ಒಂದೆ ಕಡೆಗೆ ಕೂಡಿ, ಕಾಪಿಟ್ಟ ನಂದನವನ. ಬಣ್ಣಬಣ್ಣದ ಗಿಡ-ಮರ-ಎಲೆ-ಹೂ-ಹಣ್ಣು-ಕಾಯಿಗಳು, ಚಿತ್ರಚಿತ್ತಾರದ ಹಕ್ಕಿ-ಪಕ್ಕಿ, ಚಿಟ್ಟೆಗಳು ಹಾಗೂ ಲೆಕ್ಕವಿಲ್ಲದಷ್ಟು ಪರಿಮಳದ ಸುಗ್ಗಿ-ಸೊಬಗು. ಜೊತೆಗೆ ಒಂದಿಷ್ಟು ಕಲ್ಲು-ಮುಳ್ಳು-ಜೇಡ-ಮಾಸಲು ಬಣ್ಣ! ಈ ಎಲ್ಲವೂ ಬದುಕಿನ ಕಾವ್ಯದ ನೆರಳು-ಬೆಳಕಿನ ನಿತ್ಯದ ಆಟ. ಹತ್ತಿರದಿಂದ ಕಣ್ತೆರೆದು ಕಾಣಬೇಕಷ್ಟೆ! ಕಂಡವರಿಗೆ ಸಾಲು-ಸಾಲು ಮಹಾಕಾವ್ಯ; ಕಾಣದವರಿಗೆ ಕತ್ತೆಯ ನಡಿಗೆ. ಇಂತದೊಂದು ಅನುಭವಲೋಕವನು ಕಂಡುಂಡ ಸಹೃದಯಿ ಪ್ರಪಂಚಕೆ ತೆರೆದಿಡುವ ಡಾ.ಎಚ್.ಎಸ್.ಸತ್ಯನಾರಾಯಣರ ‘ಬಿದಿರ ತಡಿಕೆ’ ಓದಿ, ಸುಖಿಸಬಹುದಾದ ಪ್ರಬಂಧ ಸಂಕಲನ.      ಬಿದಿರ ತಡಿಕೆಯ ಹಿಂದೆ ಬುದ್ದಿಭಾವದ ನೂರೆಂಟು ವಿಸ್ಮಯಗಳು. ಕಾಣದ ಕಡಲನು ಕಡೆಕಡೆದು ನಿಲ್ಲಿಸಿದ ಪ್ರಬಂಧದ ಪುತ್ಥಳಿಯಿದು. ಪ್ರಬಂಧಕಾರರ ಆತ್ಮೀಯತೆಯ ಅಪ್ಪುಗೆ, ಗೆಳೆತನ ಹಾಗೂ ಹೃದಯವಂತಿಕೆಯ ಮುತ್ತುಮಣಿಗಳನ್ನು ಒಂಭತ್ತು ಪ್ರಬಂಧಗಳು ತುಂತುಂಬಿ ಸುರಿಯುತ್ತವೆ. ಸ್ವಾನುಭವ ಕಥನಗಳಂತೆ ಕಂಡರೂ ವೈವಿಧ್ಯತೆಯ ಪ್ರಪಂಚವನ್ನು ತೊಟ್ಟುಕೊಂಡೆ ಮಾತಿಗಿಳಿಯುವ ಪ್ರಬಂಧಗಳು ಓದುಗರ ಸ್ವತ್ತಾಗಲು ಹೆಚ್ಚು ಸಮಯ ಬೇಕಿಲ್ಲ. ಬದುಕಿನೂರಿನ ಅಗಣಿತ ಲೋಕದೊ...

*ಮುಳ್ಳು...*

Image
ಕಾರಣವಿಲ್ಲದೇ ಚುಚ್ಚುವುದೇ ಇಲ್ಲ ಮುಳ್ಳು! ಕಾರಣವ ತಿಳಿದು, ಹೂರಣವ ಹಿಡಿದು ತಾಳತಪ್ಪಿದ ಜಗದ ಹೆಜ್ಜೆಗೆ ಚುಚ್ಚುಲೇಬೇಕು ಮುಳ್ಳು! ಬೆಳಗಲೇಬೇಕು ಬಾಳು! ಲೋಕದೂರಿನ ದಾರಿಗುಂಟ ಸೊಂಬೇರಿ ಹೆಬ್ಬಾವುಗಳ ಗಾಢನಿದ್ರೆ! ಮುಖವಾಡದ ಸಂತೆಯಲಿ ಕಾವಲಿಲ್ಲದ ಕಾವಲಿ ತುಂಬ ಸದಾ ಬೇಯುವ ಯಾರದೋ ರೊಟ್ಟಿ! ಬೇಕಲ್ಲವೇ ಮುಳ್ಳು ? ಎಚ್ಚರದ ಹಾಡಿಗೆ! ಬೆಚ್ಚನೆಯ ಗೂಡಿಗೆ! ನಗುವ ಕಾಡಮಲ್ಲಿಗೆಗಂಟಿ ಪರಿಮಳದ ಕಂಪ ಮೆಲ್ಲುತ ಗೂಡು ಕಟ್ಟುವ ಕಾಡಸಿಪಾಯಿ! ಬೆಳೆವ ಬೆಳೆಗೆ ಬೆಳಕ ಬೀರಿ ಕಳ್ಳನೂರಿಗೆ ಬೇಲಿಯಾಗಿ ಹೊಳೆಹೊಳೆವುದು ಬರಿಯ ಮೈಯಲಿ; ಬೆನ್ನೆಲುಬಿಗೆ ಬೆನ್ನೆಲುಬಾಗಿ! ಉಪವಾಸದಿ ಜೀತಗೈಯ್ವ ಏಳುಸುತ್ತಿನ ಕೋಟೆಗೆ ಕೊಡಲಿ ಪೆಟ್ಟಿನ ಸುಪ್ರಭಾತ! ನಾಡಗೋಡೆಗೆ ಅಡ್ಡಬಿದ್ದು ಬಾಳು ಕಾಯುವ ಗೆಳೆಯಗೆ ಬೈಗುಳ ಮೆತ್ತಿದ  ಕತ್ತೆಯೊದೆತ! ಮನದ ಗೋಡೆಯ ತುಂಬ ರಂಗುರಂಗಿನ ಮುಳ್ಳು! ನಾಡಗುಡಿಯ ಸುತ್ತ ಹಸಿದ ಹಲ್ಲಿನ ಬೆಟ್ಟ! ಹಕ್ಕಿ ಹಾಡಿಗೆ, ನವಿಲ ನಾಟ್ಯಕೆ ಮೂಗು ಮುರಿದು, ಕೇಶ ಕೆರೆದು ವಿಷದ ಲಾಲಿಯ ಹಾಡುತ ಗರ್ಭ ಸೀಳುವ ಮೊನೆಗಳೇ ನಿಜದ ಮುಳ್ಳಿನ ಗೊನೆಗಳು!           ***** ಎಂ.ಡಿ.ಚಿತ್ತರಗಿ ಕನ್ನಡ ಅಧ್ಯಾಪಕರು ಹುನಗುಂದ.

ಕಥಾತಪಸ್ವಿ - ಅಬ್ಬಾಸ್ ಮೇಲಿನಮನಿ

Image
ಕಥಾತಪಸ್ವಿ ....... (ಬದುಕು ಬರಹದಿಂದ ಆಯ್ದ ಭಾಗ) “ ಭಾರತವನ್ನು ತಿಳಿಯಬೇಕೆಂದರೆ ಇಡೀ ಭಾರತವನ್ನೆಲ್ಲ ಸುತ್ತಲೇಬೇಕಿಲ್ಲ; ಭಾರತದ ಇತಿಹಾಸವನ್ನೆಲ್ಲ ಓದಲೇಬೇಕಿಲ್ಲ. ಸ್ವಾಮಿ ವಿವೇಕಾನಂದರ ಬದುಕನ್ನು ಅರಿತುಕೊಂಡರೆ ಸಾಕಷ್ಟೇ” ಎಂದ ರವೀಂದ್ರನಾಥ ಠ್ಯಾಗೋರರ ಮಾತು ಎಷ್ಟೊಂದು ಅರ್ಥಪೂರ್ಣ. ಅದರಂತೇ ಈ ನಾಡಿನಲ್ಲಿ ಅದೆಷ್ಟೋ ಶತಮಾನಗಳ ಹಿಂದೆ ಬಾಳಿ ಬದುಕಿದ ಅನೇಕ ಮಹನೀಯರು, ರಾಜ-ಮಹಾರಾಜರು, ತತ್ವಜ್ಞಾನಿಗಳು, ಸಾಧಕರು ಮಾತ್ರವಲ್ಲದೇ ಸಾಮಾನ್ಯರೂ ಕಾಲದೋಘದಲ್ಲಿ ಸರಿದು ಹೋಗಿದ್ದರೂ ಕೊಟ್ಟ ಕೊಡುಗೆಯಿಂದ, ಬಿತ್ತಿದ ಬೀಜದಿಂದ ಇಂದಿಗೂ ಜೀವಂತವಾಗುತ್ತಲೇ ಇದ್ದಾರೆ. ನಿತ್ಯ ಮರುಹುಟ್ಟು ಪಡೆಯುತ್ತಲೇ ಇದ್ದಾರೆ.  ಕೋಟಿ-ಕೋಟಿ ಜನ ಸತ್ತ ಮರುಗಳಿಗೆಯಲ್ಲೇ ನೆನಪಿನ ಪಾತಾಳದಲ್ಲಿ ಕೊಚ್ಚಿ ಹೋದರೆ, ಜೀವಂತವಿದ್ದಾಗಲೇ ಜನಮಾನಸದಿಂದ ಕಣ್ಮರೆಯಾದಂತೆ ಬದುಕುತ್ತಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಸಾಗರೋಪಾದಿಯ ಈ ಜೀವನಚಕ್ರದಲ್ಲಿ ಬೊಗಸೆಯಷ್ಟಿರುವ ಸಾಧಕರು ತಮ್ಮ ಆಯುಷ್ಯದ ಚೌಕಟ್ಟಿನೊಳಗೆ ವಿಭಿನ್ನವಾಗಿ ಬದುಕಿ, ಸಿಹಿಗಿಂತಲೂ ಕಹಿಯನ್ನೇ ಹೆಚ್ಚಾಗಿ ಉಂಡುಟ್ಟು, ಕಾಲ, ಧರ್ಮ ಹಾಗೂ ಸೀಮಾತೀತವಾದ ಆದರ್ಶಗಳನ್ನೇ ನಡೆ-ನುಡಿಯಲ್ಲಿ ಉಸಿರಾಡಿ, ಜಗದ ಕತ್ತಲೆಗೆ ಎಣ್ಣೆಯಾದವರು; ಬತ್ತಿಯಾದವರು; ದೀಪವಾದವರು. ಇಂದಿಗೂ ಅವರು ಬಿಟ್ಟುಹೋದ, ಕೊಟ್ಟುಹೋದ ಆದರ್ಶದ ಬೆಳಕಿನಲ್ಲೇ ಈ ಜಗತ್ತು ಅಂಬೆಗಾಲಡಿಯಲಿ ಉಸಿರಾಡುತ್ತಾ ಸಾಗುತ್ತಿದೆಯೆಂಬುದರಲ್ಲಿ ಯಾವುದ...

ಕವಿತೆ - ಗಾಂಧಿ!!!

Image
ಗಾಂಧಿ!!* ಓ.. ಮಹಾತ್ಮನೇ ಹುಟ್ಟಿ ಬರಬೇಡ, ಮತ್ತೆಂದೂ ಎದೆ ಒಡೆದೀತು, ದೇಶ ಕಂಡು! ಜಗದ ಹೃದಯ ಗೆದ್ದ ಎದೆಗಾರನೆ! ಮನೆ-ಮನಕೆ ಕನಸು ಮಾರುವ ಕನಸುಗಾರನೆ! ಒಣಕಟ್ಟಿಗೆಯಲೂ ರೋಷವನುಕ್ಕಿಸುವ ಹೋರಾಟಗಾರನೇ! ಗುಂಡು ಹಾರಿಸುವ ಸ್ವಾತಂತ್ರ್ಯವ ಕೊಟ್ಟು ಹೋದವನೇ! ಹುಟ್ಟಿ ಬರಬೇಡ, ಮತ್ತೆಂದೂ ಎದೆ ಒಡೆದೀತು, ದೇಶ ಕಂಡು! ಜೀವವಿಲ್ಲದ ಕಲ್ಲು-ಕಟ್ಟಿಗೆ ತುಂಡುಗಳೂ ಎದೆಯುಬ್ಬಿಸಿ ಹಾಡುತಿವೆ ದ್ವೇಷ-ಅಸೂಯೆಯ ಲಾಲಿಯನು! ಕಣಕಣದಲೂ ವಿಷದ ಹೊಗೆ ಸುತ್ತಿ ಸುಳಿದು, ಮತ್ತೇರಿಸಿ, ಬೀಗುತಿದೆ ಒಣಜಂಭದಿ ರಾಜ್ಯವಿಲ್ಲದ ಆಸ್ಥಾನದಲಿ!. ನಿನ್ನ ಕನಸಿನ ನಾಡ ತುಂಬೆಲ್ಲಾ ಜಿನುಗುತಿದೆ ಕೊಳೆಯ ಹೊಳೆ! ಅಂತರಂಗದಿ ಕಸದ ರಾಶಿ! ಮನೆ-ಮನೆಯ ಅಂಗಳದಲಿ ಬಿರುಕು ಗೋಡೆಗಳು! ಅಂಗೈ ಗೆರೆಗಳ ತುಂಬಾ ರಕ್ತವಾಸನೆ! ಹೆಂಗಳೆಯರ ಬದುಕು ನಿತ್ಯ ನಾಯನರಕ! ಬಂದೂಕಿನ ಸದ್ದು ಸತ್ಯ ಸುಪ್ರಭಾತ!. ನೀ ಕೊಟ್ಟು ಹೋದ ತತ್ವಾದರ್ಶಗಳೆಲ್ಲ ಭದ್ರವಾಗಿ ಕೀಲಿಹಾಕಿದ ತಿಜೋರಿ, ಕಪಾಟಿನ  ಕಮಟು ಮೂಲೆಗಳಲಿ ನಿದ್ರಿಸುತ್ತಿವೆ, ಬಹುಕಾಲದಿಂದ! ನೀ ಖಂಡಿಸಿದ ಹೊಲಸು ಬೇರುಗಳು ಸದ್ದುಗದ್ದಲದಿ ಗದ್ದುಗೆ ಏರಿ, ಹೂ ಬಿಡಿಸಿ, ಕಾಯಿ, ಹಣ್ಣಾಗಿಸಿ ನಗುತ್ತಿವೆ, ಮೀಸೆಯ ಮರೆಯಲ್ಲಿ! ಮೆರೆಯುತಿವೆ ಅಧಿಪತಿಯಾಗಿ! ಕತ್ತಲ ಸಾಮ್ರಾಜ್ಯದಲಿ! ನಿನ್ನ ಹೃದಯದ ಮನೆಯೀಗ ಹಾಳುಬಿದ್ದ ಹಂದರ; ನೋಡಿ ನಗುತಿಹನು ಚಂದಿರ! ಸಂಶಯದ ನೆರಳೇ ಎಲ್ಲೆಲ್ಲೂ! ಕಿಡಿಮಾತುಗಳೇ ಎಡಬಲದಲ್ಲಿ ಘೋಷ...

ಸಾವಿನಂಚಿನ ಗೆರೆ

Image
* ಸಾವಿನಂಚಿನ ಗೆರೆ* ಇದ್ದಕ್ಕಿದ್ದಂತೆ ಹೊಳೆಯಿತವನಿಗೆ ಬದುಕು ನಶ್ವರವೆಂದು! ದೀರ್ಘಮೌನಿಯಾದ!  ಸಾವಿನ ಗೆರೆ ದಾಟಲು. ತಾನು ಇಂದೋ ನಾಳೆಯೋ ಶಿವನ ಆಲಯಯನ್ನು, ಶವದ ಮನೆಯನ್ನು  ಸೇರಬಹುದೆನಿಸಿತು... ಬಂಧು-ಬಳಗಕ್ಕಿಲ್ಲ ಚಿಂತೆ! ಭಯದ ಗೆರೆಗಳಂತೂ  ಇಲ್ಲವೇ ಇಲ್ಲ. ಲೋಕಕ್ಕಂತೂ....? ಬೇಸರಿಸಿತು ಮನ ಸಿದ್ದಗೊಂಡಿತು ತನು ಹದಗೊಂಡ ದೇಹಾತ್ಮಗಳು ಸನ್ನದ್ದಗೊಂಡವು ಸಾವಿನ ಕದ ತೆರೆಯಲು.. ಯೋಗ-ಧ್ಯಾನದಿ ವದನ ಪ್ರಸನ್ನಗೊಳಿಸಿ ಕ್ರಾಪು ತೆಗೆದು, ಸೇವ್ ಮಾಡಿ ಆಭ್ಯಂಜನಕಿಳಿದ, ನಗುಮೊಗದಿ ಮೆರವಣಿಗೆ ಹೊರಟ, ಗರಿಗರಿ ಶ್ವೇತವಸ್ತ್ರದೊಳು. ಊರೆಲ್ಲ ಸುತ್ತಾಡಿ, ಎಲ್ಲರ ನಾಲಿಗೆಯೊಳು ಒಂದಾಗಿ, ಸ್ನೇಹಿತರು, ಬಂಧುಬಳಗಕೆಲ್ಲ ಸಿಹಿಮಾತನುಣಿಸಿ,  ಶುಕ-ಪಿಕಗಳ ಧ್ವನಿಗೂ ಕಿವಿಯಾಗಿ, ಕವಿಯಾದ. ಒಳಗಿನ ಭಯವನು ಅದಮಿಟ್ಟುಕೊಂಡು, ಕೊನೆಯ ಭೆಟ್ಟಿಯಲಿ ಸಂಭ್ರಮಿಸಿ, ತೋರಿಕೆಯ ಖುಷಿಯಲಿ  ನಕ್ಕು-ನಲಿದು,  ಎಲ್ಲರೊಳಗೊಂದಾದ. ಬದಲಾದ ನಡೆನುಡಿಗೆ ಊರೆಲ್ಲ ಫಿದಾ! ಮನೆಯ ಒಳಗೋಡೆಗಳಿಗೂ ಅಚ್ಚರಿ! ಆ ರಾತ್ರಿ! ಮಾತು! ಭೋಜನ!  ಸಂಭ್ರಮದ ಹೊನಲು! ಎಲ್ಲರ ಬಿಗಿದಪ್ಪಿ,  ಕರುಳಕುಡಿಗಳ ಮುದ್ದಿಸಿ ಬೀಳ್ಕೊಟ್ಟು, ಶಯನಗೃಹ ಹೊಕ್ಕ; ಒಲ್ಲದ ಮನಸಲಿ. ಭಯಾತಂಕ ಬದಿಗೊತ್ತಿ, ಕಣ್ಣೀರು ಬತ್ತಿಸಿ ಚಿತ್ತಾತ್ಮಶುದ್ದಿಯೊಳು ಸಾವಿನ ಮನೆಯ ಕದತಟ್ಟಿ, ನಗುಮೊಗದಿ ಎದುರಾದ. ಸಾವು ಬರಲಿಲ್ಲ! ಇವನು ಬಿಡ...

ಬೆಳಗಿನೊಂದಿಗೆ ಒಂದು ಸುತ್ತು

Image
ಜಾವದ ಬೇವು* ಓ ಮನುಜಾ.... ಬಾ ಇಲ್ಲಿ.... ವಿರಮಿಸು ಬಾ... ಎಲ್ಲಿಗೋಡುವೆ ಧಾವಂತದಲಿ..? ಅನುದಿನವೂ ಅದೇ ಅವಸರ ಸರಸರನೆ ಹೆಜ್ಜೆ ಹಾಕಿ, ಬಿರಬಿರನೆ ಓಡಾಡಿ ಸುಳಿದು ಸುತ್ತಾಡಿ, ಮೈಮುರಿದು ಬೆವರಿಳಿಸಿ ಓಡೋಡಿ ಹೊಂಟೋಗುವಿ ನಿತ್ಯ ಮುಂಜಾವಿನಲಿ! ಏಕಿಷ್ಟು ಅವಸರ....? ನೋಡು ನನ್ನನೊಮ್ಮೆ.. ಕಹಿಬೆವರಲಿ ಸಿಹಿಯನುಣಿಸಿ ಬಿರುಬಿಸಿಲಲಿ ತಂಪಿನಿಂಪೆರೆದು ಜೀವಜಂತುಗಳಿಗೆ ಒಡಲ ಸವೆಸಿ ಅರಸಿ ಬಂದವರ ಕೈಹಿಡಿದು,  ಮಾತೃವಾತ್ಸಲ್ಯವನೆರೆಯುತ.... ಬೋಳು-ಬೋಳಾದರೂ ಮತ್ತೆ ಮತ್ತೆ ಚಿಗಿತು.. ಕತ್ತರಿಸಿದರೂ ಸತ್ತು ಸುತ್ತ ಚಿಗುರೊಡೆದು.. ನಾಲ್ಕಂಗುಲವೇ  ಸಗ್ಗವೆಂದರಿದು ಅನುಗಾಲ ದೃಢವಾಗಿ ನಿಂತಿಲ್ಲವೇ....? ನಿಮ್ಮೊಲವ ಬಯಸಿ..ಬಯಸಿ.. ಪಿಸುಮಾತನೊಮ್ಮೆ ಆಲಿಸು ಬಾ ನನ್ನೊಳ ಕೊಳವನೊಮ್ಮೆ ಕೆಲ ರಸನಿಮಿಷಗಳಾದರೂ ಸ್ನೇಹರಾಗದಲಿ ಇಣುಕು ಬಾ.. ಚಿಂತೆ ಸಂತೆಯಿಂದ ಪಾರಾಗಿ ಕಂತೆ ಭ್ರಾಂತಿಯಿಂದ ಕಣ್ದೆರೆದು ದೇಹಸಂಬಂಧಗಳ ಮರೆತು ಆತ್ಮಸಾಂಗತ್ಯದಲಿ ಬೆರೆತು ಮನದ ಬೇಗುಧಿಗೆ ತಂಪೆರೆದು ಪ್ರಕೃತಿಯೊಲವಿಗೆ ಮನದೆರೆದು ಒಂದು ಕ್ಷಣ ಕಿವಿಯಾಗು ಬಾ.. ಒಂದು ಕ್ಷಣ ಕವಿಯಾಗು ಬಾ.. ಸುಳಿವ ತಂಗಾಳಿಯಲಿ ಮಿಂದು ಪಕ್ಕಿಗಳ ಇಂಚರವನುಂಡು ಶಯನಮಂಚದೊಳು ಓಲಾಡುವ ಶಶಿಗೊಂದಿಸಿ ಬಾಲರವಿಯ ಅಂಬೆಗಾಲಾಟವ ಕಣ್ತುಂಬಿಕೊಂಡು ನಿಸರ್ಗದ ಚೆಲುವಿನೊಡನಾಟದಿ ಸಂತಸದಿ ವಿರಮಿಸು ಬಾ.. ಸಂಭ್ರಮದಿ ಪವಡಿಸು ಬಾ.. ಸಂಸಾರ ಬಂಧದಲಿ ಸಿಲುಕಿ ಕಛೇರ...